ಸರ್ಕಾರದ ವಿರುದ್ಧ ರೈತರ ಆಕ್ರೋಶ.
ಸಂಸದ ಭಗಂತ ಖೂಬಾ ಮನೆ ಎದುರು ಪ್ರತಿಭಟನೆ.
ಸರ್ಕಾರದ ವಿರುದ್ಧ ರೈತರ ಆಕ್ರೋಶ.
ಸಂಸದ ಭಗಂತ ಖೂಬಾ ಮನೆ ಎದುರು ಪ್ರತಿಭಟನೆ

ಬೀದರ: ರೈತರು ಸಂಕಷ್ಟಕ್ಕೆ ಒಳಗಾಗುವ ಕಾನೂನುಗಳು ಸರ್ಕಾರ ಜಾರಿ ಮಾಡಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆ ವತಿಯಿಂದ ಸಂಸದ ಭಗಂವತ ಖೂಬಾ ಮನೆ ಎದುರಿಗೆ ಪ್ರತಿ ಭಟನೆ ನಡೆದಿದರು.
ಶನಿವಾರ ನಗರದಲ್ಲಿ ಸಂಸದ ಭಗಂವತ ಖೂಬಾ ಮನೆ ಎದುರಿಗೆ ಪ್ರತಿಭಟನೆ ನಡೆಸಿದ ರೈತ ಸಂಘ ಮುಖಂಡರು’ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ರೈತ ವಿರುದ್ಧ ಘೋಷಣೆ ಹಾಕಿದರು.
ರೈತರಿಗೆ ಮಾರಕವಾಗುವ ಕಾನೂನುಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದಗಳು ರಚಿಸುತ್ತಿರುವುದು ರೈತ ವರ್ಗಕ್ಕೆ ಮಾರಕವಾಗುವ ಸಾಧ್ಯತೆಗಳು ಹೆಚ್ಚಿವೆ
ಎಂ.ಎಸ್.ಪಿ ದರದಲ್ಲಿ ಕಡಿಮೆ ದಾಸ್ತಾನು ಖರೀದಿಸುವ ಬದಲಿಗೆ ಈ ಹಿಂದಿನಂತೆ ರೈತರ ಉತ್ಪನಗಳು ಖರೀದಿಸಬೇಕು. ಉದ್ದು ಖರೀದಿಯಲ್ಲಿ ರೈತರನ್ನು ಅನ್ಯಾಯ ಮಾಡಲಾಗುತ್ತದೆ. ಎಪಿಎಂಸಿ ಕಾಯ್ದೆ ಕೂಡ ರೈತ ವರ್ಗಕ್ಕೆ ಮಾರಕವಾಹಿದೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ಇದೇ ಸಂದರ್ಭದಲ್ಲಿ ಸರ್ಕಾದ ಆದೇಶ ಪ್ರತಿಗಳನ್ನು ಬೆಂಕಿ ಹಚ್ಚಿ ಆಕ್ರೋಷ ವ್ಯಕ್ತಪಡಿಸಿದರು.
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















