ಹುಮನಾಬಾದ ಡಿವೈಎಸ್ಪಿಯಾಗಿ ಸೋಮಲಿಂಗ ಬಿ ಕುಂಬಾರ ಅಧಿಕಾರ ಸ್ವೀಕಾರ.
ಹುಮನಾಬಾದ ಡಿವೈಎಸ್ಪಿಯಾಗಿ ಸೋಮಲಿಂಗ ಬಿ ಕುಂಬಾರ ಅಧಿಕಾರ ಸ್ವೀಕಾರ.
ಹುಮನಾಬಾದ: ಹುಮನಾಬಾದ ಉಪ ವಿಭಾಗದ ಡಿವೈಎಸ್ಪಿ ಆಗಿ ಸೋಮಲಿಂಗ ಬಿ ಕುಂಬಾರ ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಹಾವೇರಿ ಜಿಲ್ಲೆಯಲ್ಲಿ ಎಸಿಬಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಇವರು ಇದೀಗ ಹುಮನಾಬಾದ ಉಪಾಧೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
https://play.google.com/store/apps/details?id=kknewsonline.in
ಮೂಲತಃ ಬಿಜಾಪುರ ಜಿಲ್ಲೆಯವರಾಗಿದ್ದು, ಮೊದಲಿಗೆ ದೇಶದ ಗಡಿ ಕಾಯುವ ಸೈನಿಕರಾಗಿ ಸೇವೆ ಆರಂಭಿಸಿದ ಇವರು, ಕಾರ್ಗಿಲ್ ಯುದ್ಧದಲ್ಲಿ ಕೂಡ ಭಾಗವಹಿಸಿ ನಂತರ ನಿವೃತ್ತಿ ಹೊಂದಿದರು. ನಂತರ ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಲ್ಲಿ ಕೂಡ ಇವರು ಸೇವೆ ಸಲ್ಲಿಸಿದ್ದಾರೆ.
ಕರ್ತವ್ಯನಿಷ್ಠೆಯೇ ನನ್ನ ಗುರಿ. ಶಿಸ್ತು ಪಾಲನೆ ಅಪರಾಧಗಳ ತಡೆ ನನ್ನ ಮುಖ್ಯ ಉದ್ದೇಶ ಎಂದು ಡಿವೈಸ್ಪಿ ಸೋಮಲಿಂಗ ಕುಂಬಾರ ಹೇಳಿದ್ದಾರೆ.
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















