ನಿಮ್ಮ ಜಿಲ್ಲೆ
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ ಸಭಾದ ಸಂಘಟನಾ ಕಾರ್ಯದರ್ಶಿ ಅಶೋಕ ಹೂಗಾರ ಫೆ.21ರಿಂದ ಒಂದು ವಾರ ಕಾಲ ಬೀದರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ ಎಂದು ಬೀದರ ಹೂಗಾರ ಸಮಾಜದ ಜಿಲ್ಲಾಧ್ಯಕ್ಷರಾದ ರಾಜಕುಮಾರ ಹೂಗಾರ ಮದಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕದ ಬೀದರ, ಕಲಬುರಗಿ, ರೈಯಚೂರ, ಯಾದಗಿರಿ, ಕೋಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲೆಗಳಲ್ಲಿ ಒಂದು ತಿಂಗಳ ಕಾಲ ಪ್ರವಾಸ…
Read More »ಹೂಗಾರ ಸಮಾಜ ಅಭಿವೃದ್ಧಿಗೆ ಸರಕಾರ ಸ್ಪಂದಿಸಬೇಕು: ಶಂಕರ್ ಹೂಗಾರ
ಬೆಂಗಳೂರು: ಹೂಗಾರ ಸಮುದಾಯದ ಅಭಿವೃದ್ಧಿಗೆ 2025-26ನೇ ಸಾಲಿನ ಬಜೆಟ್ನಲ್ಲಿ ಅನುದಾನ ನೀಡುವಂತೆ ಮತ್ತು ಪ್ರತ್ಯೇಕ ಹೂಗಾರ ಅಭಿವೃದ್ಧಿ ನಿಗಮ ಹೆಸರಿಸಿ ಅನುಷ್ಠಾನ ಮಾಡುವಂತೆ ಅಖೀಲ ಕರ್ನಾಟಕ ಹೂಗಾರ ಸೇವಾ ಮಹಾಸಭಾ ರಾಜ್ಯಾಧ್ಯಕ್ಷರಾದ ಶಂಕರ್ ಹೂಗಾರ ಅವರು ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದ್ದಾರೆ. ಮನವಿ ಪತ್ರದಲ್ಲಿನ ಪ್ರಮುಖ ಬೇಡಿಕೆಗಳು : 1. ಹಿಂದುಳಿದ ಸಮುದಾಯಗಳ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರವು ನೀಡಿರುವ 2ಎ ಪ್ರಮಾಣ ಪತ್ರವನ್ನು ಸರ್ಕಾರ ಹಿಂದೂ ಹೂಗಾರ…
Read More »ದಿನನಿತ್ಯ ಜೀವನದಲ್ಲಿ ಆಯುರ್ವೇದಕ್ಕೆ ಮಹತ್ವ ನೀಡಬೇಕು : ಡಾ| ಉಮಾಶಂಕರ
ದಿನನಿತ್ಯ ಜೀವನದಲ್ಲಿ ಆಯುರ್ವೇದಕ್ಕೆ ಮಹತ್ವ ನೀಡಬೇಕು : ಡಾ| ಉಮಾಶಂಕರ ಕಮಲಾಪೂರ್: ಮನುಷ್ಯನ ಜೀವನಕ್ಕೆ ಆಯುರ್ವೇದ ಔಷಧಿಗಳ ಮಹತ್ವದಾಗಿದ್ದು, ಅವುಗಳ ಕುರಿತು ಇಂದಿನ ಜನರು ತಿಳಿದುಕೊಳ್ಳಬೇಕಾಗಿದೆ. ಮನೆಯಲ್ಲಿನ ಅನೇಕ ಔಷಧಿಗಳಿಂದ ಅನೇಕ ರೋಗಗಳು ತಡೆಯಬಹುದು ಎಂದು ಡಾ| ಉಮಾಶಂಕರ ಹಿರೇಮಠ ತಿಳಿಸಿದರು. ಕಲಬುರ್ಗಿ ಜಿಲ್ಲೆಯ ಕಮಲಾಪೂರ್ ಪಟ್ಟಣದ ಸರಕಾರಿ ಆಯುರ್ವೇದ ಆಯುಷ್ ಆಸ್ಪತ್ರೆಯ ವತಿಯಿಂದ ಸರ್ಕಾರಿ ಕನ್ಯ ಪೌಢಶಾಲೆಯಲ್ಲಿ ಏರ್ಪಡಿಸಿದ 9ನೇ ರಾಷ್ಟಿçÃಯ ಆಯುರ್ವೇದ ದಿನಾಚರಣಿ ನಿಮಿತ್ಯ ಜಾಗತಿ, ಆರೋಗಕ್ಕಾಗಿ…
Read More »ಜವಾಬ್ದಾರಿ ಅರೆತ್ತುಕೊಂಡು ಪ್ರಾಮಾಣಿಕವಾಗಿ ಕೆಲಸ ನಿಭಾಯಿಸುವೆ ಸಂಸದ ಸಾಗರ್ ಖಂಡ್ರೆ
ಹಲಬರ್ಗಾ ಮಠದಲ್ಲಿ ಅಭಿನಂದನೆ ಜವಾಬ್ದಾರಿ ಅರೆತ್ತುಕೊಂಡು ಪ್ರಾಮಾಣಿಕವಾಗಿ ಕೆಲಸ ನಿಭಾಯಿಸುವೆ ಸಂಸದ ಸಾಗರ್ ಖಂಡ್ರೆ ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಜನ ಚಿಕ್ಕ ವಯಸ್ಸಿನಲ್ಲೇ ನನಗೆ ಗುರುತರ ಜವಾಬ್ದಾರಿ ನೀಡಿದ್ದಾರೆ. ಅದನ್ನು ಪ್ರಾಮಾಣಿಕವಾಗಿ ನಿಭಾಯಿಸಲು ಸರ್ವ ಪ್ರಯತ್ನ ಮಾಡುವೆ ಎಂದು ಸಂಸದ ಸಾಗರ್ ಖಂಡ್ರೆ ಹೇಳಿದರು. ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರ ವತಿಯಿಂದ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭ…
Read More »ಚಿಂತನ ಗೋಷ್ಠಿಯಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಚಂದ್ರಕಾಂತ ಪಟ್ನೆ ಬಣ್ಣನೆ
ಚಿಂತನ ಗೋಷ್ಠಿಯಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಚಂದ್ರಕಾಂತ ಪಟ್ನೆ ಬಣ್ಣನೆ : ಅನುಭಾವಿಗಳ ಕೂಟವಾಗಿದ್ದ ಅನುಭವ ಮಂಟಪ ಬೀದರ್: ಹನ್ನೆರಡನೆಯ ಶತಮಾನದ ಶರಣರು ಅನುಭಾವಿಗಳಾಗಿದ್ದರು. ಅನುಭವ ಮಂಟಪ ಅನುಭಾವಿಗಳ ಕೂಟವಾಗಿತ್ತು ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ಚಂದ್ರಕಾಂತ ಪಟ್ನೆ ಹೇಳಿದರು. ನಗರದ ಬಸವಗಿರಿಯ ಲಿಂಗಾಯತ ಮಹಾ ಮಠದಲ್ಲಿ ಮರಣವೇ ಮಹಾನವಮಿ ಮಹೋತ್ಸವ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವದ ಆರನೇ ದಿನವಾದ ಮಂಗಳವಾರ ನಡೆದ ಅನುಭವ ಮಂಟಪದ ಅನುಭಾವಿಗಳು ಚಿಂತನ ಗೋಷ್ಠಿಯಲ್ಲಿ…
Read More »#Humnabad : ಕಾರ್ಯಕ್ರಮಕ್ಕೆ ಬಿಜೆಪಿ ಪಕ್ಷದವರನ್ನು ಕೇಳಿ ಬರಬೇಕಾ?
ಕಾರ್ಯಕ್ರಮಕ್ಕೆ ಬಿಜೆಪಿ ಪಕ್ಷದವರನ್ನು ಕೇಳಿ ಬರಬೇಕಾ: ಮಾಜಿ ಸಚಿವ ರಾಜಶೇಖರ ಪಾಟೀಲ ಹುಮನಾಬಾದ: ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಕೊಠಡಿ ಉದ್ಘಾಟನೆ ಸಮಾರಂಭದಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ-ಉಪಾಧ್ಯಕ್ಷರ ಕೊಠಡಿ ಉದ್ಘಾಟನೆಗೆ ನನ್ನಗೂ ಸೇರಿದಂತೆ ಅನೇಕರಿಗೆ ಆಹ್ವಾನಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಜೆಪಿ ಪಕ್ಷದವರಿಗೆ ಕೇಳಿ ಬರಬೇಕಾ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು. ಚಿಟಗುಪ್ಪ ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು,…
Read More »#Humnabad : ಬಿಜೆಪಿ-ಕಾಂಗ್ರೆಸ್ ಕರ್ಯಕರ್ತರ ಮಧ್ಯೆ ಹೈಡ್ರಾಮಾ
ಬಿಜೆಪಿ-ಕಾಂಗ್ರೆಸ್ ಕರ್ಯಕರ್ತರ ಮಧ್ಯೆ ಹೈಡ್ರಾಮಾ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಕೊಠಡಿ ಉದ್ಘಾಟನೆ ಶಿಷ್ಠಾಚಾರ ವಿಷಯಕ್ಕೆ ಗೊಂದಲ. ಹುಮನಾಬಾದ: ತಾಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಪುರಸಭೆ ಹಾಗೂ ಚಿಟಗುಪ್ಪ ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಕೊಠಡಿ ಉದ್ಘಾಟನೆ ಸಂದರ್ಭದಲ್ಲಿ ಬಿಜೆಪಿ-ಕಾಂಗ್ರೆಸ್ ಕರ್ಯಕರ್ತರ ಮಧ್ಯೆ ರಾಜಕೀಯ ಹೈಡ್ರಾಮ ಮಂಗಳವಾರ ನಡೆದಿದೆ. ಹಳ್ಳಿಖೇಡ(ಬಿ) ಹಾಗೂ ಚಿಟಗುಪ್ಪ ಪಟ್ಟಣದ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಕೊಠಡಿ ಉದ್ಘಾಟನೆಯನ್ನು ಮಾಜಿ ಸಚಿವ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಭೀಮರಾವ ಪಾಟೀಲ…
Read More »ಜಯದೇವ ಆಸ್ಪತ್ರೆ: ನಿವೃತ್ತ ಅಧಿಕಾರಿಗೆ ಮರು ನೇಮಕಕ್ಕೆ ಶಿಫಾರಸು.?
ಜಯದೇವ ಆಸ್ಪತ್ರೆ: ನಿವೃತ್ತ ಅಧಿಕಾರಿಗೆ ಮರು ನೇಮಕಕ್ಕೆ ಶಿಫಾರಸು.? ಕಲಬುರಗಿ: ರಾಜ್ಯ ಸರ್ಕಾರದ ಹಲವು ಇಲಾಖೆ ಹಾಗೂ ಸಚಿವಾಲಯದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಅಧಿಕಾರಿಗಳು, ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರ ಒಂದೆಡೆ ಸುತ್ತೋಲೆ ಹೊರಡಿಸಿದರೆ ಇನ್ನೊಂದೆಡೆ ನೀವೃತ್ತ ಅಧಿಕಾರಿಗಳಿಗೆ ನೇಮಕಕ್ಕೆ ಸಚಿವರು ಶಿಫಾರಸು ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಹೌದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ| ಶರಣಪ್ರಕಾಶ ಪಾಟೀಲ್ ಅವರು ನಿವೃತ್ತಿ ಜತೆಗೆ ಗುತ್ತಿಗೆ ಆಧಾರದ ಮೇಲಿನ ಹುದ್ದೆಯಿಂದ…
Read More »ರಾಜಶೇಖರ ಪಾಟೀಲ ಬೀದರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ.?.
ರಾಜಶೇಖರ ಪಾಟೀಲ ಬೀದರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ..? ಹುಮನಾವಾದ: ಬೀದರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ರಾಜಶೇಖರ ಪಾಟೀಲ ಬಹುತೇಕ ಖಚಿತ ಎನ್ನಲಾಗುತ್ತಿದೆ. ನಾಲ್ಕು ಬಾರಿ ಶಾಸಕರಾಗಿ ಸಚಿವರಾಗಿ ಕಾರ್ಯ ನಿರ್ವಹಿಸಿದ ರಾಜಶೇಖರ ಪಾಟೀಲ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸಲೇ ಬೇಕು ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ಕಾಂಗ್ರೆಸ್ ಪಕ್ಷದ ವರಿಷ್ಠರು ಒತ್ತಾಯಿಸುತ್ತಿರುವ ಬಗ್ಗೆ…
Read More »ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದಲ್ಲಿ ಶಿಕ್ಷೆ…!
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದಲ್ಲಿ ಶಿಕ್ಷೆ..! ಬೀದರ್ : ಆದಾಯಕ್ಜಿಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ ನಗರದ ಸೆಷನ್ಸ್ ಹಾಗೂ ವಿಶೇಷ ನ್ಯಾಯಾಧೀಶರ ನ್ಯಾಯಾಲಯವು ಸರ್ಕಾರಿ ನೌಕರನಾಗಿದ್ದ ತುಳಸಿರಾಮಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ ₹ 50 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ. ತುಳಸಿರಾಮ ಅಣ್ಣೆಪ್ಪ ನಂದಗಾಂವೆ ಶಿಕ್ಷೆಗೆ ಒಳಗಾದವರು. ಇವರು ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ಅವರ ಆಪ್ತ ಕಾರ್ಯದರ್ಶಿಯಾಗಿ ಹಲವು…
Read More »


















