Home ನಿಮ್ಮ ಜಿಲ್ಲೆ ಬೀದರ ಬಸವೇಶ್ವರ ಜಯಂತಿ ಸರಳ ಆಚರಣೆ.

ಬಸವೇಶ್ವರ ಜಯಂತಿ ಸರಳ ಆಚರಣೆ.

ಹುಮನಾಬಾದ: ಬಸವ ಜಯಂತಿ ನಿಮಿತ್ಯ ಸಮಾಜದ ಮುಖಂಡರು ಪುರಸಭೆ ಅಧಿಕಾರಿಯೊಂದಿಗೆ ಸೋಮವಾರ ಸಂಜೆ ಚರ್ಚೆ ನಡೆಸಿದರು .

ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಇರುವ ಕಾರಣ ಸರಳವಾಗಿ ಆಚರಣೆ ಮಾಡಲು ಸಮಾಜದ ಮುಖಂಡರು ನಿರ್ಧರಿಸಿದ್ದು, ಎ.26ರಂದು ಬೆಳಿಗ್ಗೆ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಸರಳ ಜಯಂತಿ ಆಚರಣೆ ಮಾಡಲಾಗುವುದು. ಪುರಸಭೆ ವತಿಯಿಂದ ಸ್ವಚ್ಛತೆ ಕಾರ್ಯ ನಡೆಸಬೇಕು. ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಪುರಸಭೆ ಅಧಿಕಾರಿಗೆ ತಿಳಿಸಿದರು. ಹೆಚ್ಚಿನ ಜನ ಸೇರಿದಂತೆ ವಚ್ಚರಿಕೆ ವಹಿಸಬೇಕು ಎಂದು ಅಧಿಕಾರಿ ತಿಳಿಸಿದರು.

ಮುಖಾಧಿಕಾರಿ ಶಂಭುಲಿಂಗ ದೇಸಾಯಿ,
ಮಲ್ಲಿಕಾರ್ಜುನ ಮಾಶೆಟ್ಟಿ, ಸುನೀಲ ಪಾಟೀಲ, ರವಿ ಮಾಡಗಿ, ಮಹೇಶ್ ಅಗಡಿ, ಸೋಮಯ್ಯ ಮಠಪತಿ, ಶ್ರೀನಾಥ ದೇವಣಿ, ಬಾಬುರಾವ ಪರಮಶೇಟ್ಟಿ, ಜಗದೀಶ ಭಾವಿ, ಮಲ್ಲಪ್ಪ ತುಪ್ಪದ, ಶಕರ ಕೊರಿ, ಮಲ್ಲಪ್ಪ ತಾಂಡೊರು, ಸಂತೋಷ ನಾವದಗಿ, ರಾಜು ಕಾರಂಜಿ ಇದ್ದರು.

 

Date: 20-04-2020

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…