ನಿಮ್ಮ ಜಿಲ್ಲೆ
ಬೀದರ್ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಅಯ್ಕೆ ಯಾವಾಗ..?
ಬೀದರ್: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ನಗರಸಭೆಗೆ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸಪ್ಟೆಂಬರ್ 17ರಂದು ನಿರ್ದೇಶನ ನೀಡಿದ್ದಾರೆ. ಕಳೆದ 18ತಿಂಗಳ ಹಿಂದೆ ನಗರಸಭೆ ಚುನಾವಣೆ ನಡೆದು ಸದಸ್ಯರ ಆಯ್ಕೆಯಾಗಿರುತ್ತದೆ. ನಗರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ– ‘ಅ’ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.ನಗರಸಭೆಗೆ ಚುನಾವಣೆ ನಡೆದರೂ 18 ತಿಂಗಳು ಕಳೆದರೂ ರಾಜ್ಯ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನೇ…
Read More »ಆಟೋದಲ್ಲಿ ಗಸ್ತು ನಡೆಸಿದ CPI ಶರಣಬಸಪ್ಪ ಕೋಡ್ಲಾ
ಆಟೋದಲ್ಲಿ ಗಸ್ತು ನಡೆಸಿದ CPI ಶರಣಬಸಪ್ಪ ಕೋಡ್ಲಾ ಹುಮನಾಬಾದ: ಪಟ್ಟಣದಲ್ಲಿ ಅಪರಾಧ ಕೃತ್ಯಗಳು ತಡೆಗಟ್ಟುವ ನಿಟ್ಟಿನಲ್ಲಿ ಹುಮನಾಬಾದ ಸಿಪಿಐ ಶರಣಬಸಪ್ಪ ಕೋಡ್ಲಾ ನೇತೃತ್ವದಲ್ಲಿ ಆಟೋದಲ್ಲಿ ಗಸ್ತು ನಡೆಸುತ್ತಿದ್ದಾರೆ. ವಿವಿಧ ಅಪರಾಧ ಕೃತ್ಯಗಳು ತಡೆಯುವ ನಿಟ್ಟಿನಲ್ಲಿ ರಾತ್ರಿ ಸಮಯದಲ್ಲಿ ಪೊಲೀಸರು ಗಸ್ತು ನಡೆಸುವುದು ಸಾಮಾನ್ಯ ಆದರೆ, ಸಾಮಾನ್ಯ ಜನರಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಟೋದಲ್ಲಿ ಪ್ರಯಾಣಿಕರಂತೆ ಸಂಚರಿಸಿ ರಾತ್ರೆ ಸಮಯದಲ್ಲಿ ಸಂಚರಿಸುತ್ತಿರುವ ಜನರ ಮೇಲೆ ನಿಗಾ ವಹಿಸಿದರು. ಸಂಶಯಾಸ್ಪದ ವ್ಯಕ್ತಿಗಳನ್ನು…
Read More »ಅರ್ಧ ನಿರ್ಮಾಣಗೊಂಡ ಕಟ್ಟಡ ತೆರವು.
ಬೀದರ:ಸೆ.01/ ಕ್ರೀಯಾ ಯೋಜನೆ ಪ್ರಕಾರ ಸರ್ಕಾರಿ ಕಟ್ಟಡ ನಿರ್ಮಿದ ಕಾರಣ ಜೆಸಿಬಿ ಮೂಲಕ ಕಟ್ಟಡ ತೆರವುಗೊಳಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಚಿಟಗುಪ್ಪ ತಾಲೂಕಿನ ನಿರ್ಣಾ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಕ್ಕೆ ತಳಪಾಯ ನಿರ್ಮಾಣ ಮಾಡದೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿರುವ ಕುರಿತು ಸ್ಥಳೀಯ ಜನರು ದೂರಿದರು. ಕಟ್ಟಡದ ನಿರ್ಮಾಣದ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ಜೆಸಿಬಿ ಯಂತ್ರ ಬಳಸಿ ತೆರವುಗೊಳ್ಳಿಸಿದ ಘಟನೆ ಕೂಡ ನಡೆದಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ…
Read More »ಹುಮನಾಬಾದ : ಎಲ್ಲೆಡೆ ದೇಶಾಭಿಮಾನದ ಕಲರವ
ಹುಮನಾಬಾದ : ಎಲ್ಲೆಡೆ ದೇಶಾಭಿಮಾನದ ಕಲರವ ಆಜಾದಿ ಕಾ ಅಮೃತಮಹೋತ್ಸವ : ಸಿದ್ದು ಪಾಟೀಲ ನೇತೃತ್ವದಲ್ಲಿ ಬೈಕ್ ಜಾಥ ಹುಮನಾವಾದ:ಆ.14/ 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ನಿಮಿತ್ಯ ಪಟ್ಟಣದಲ್ಲಿ ಪ್ರತಿದಿನ ಹತ್ತಾರು ಜಾಥಗಳು ನಡೆಯುತ್ತಿದ್ದು ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ. ಕಳೆದ ಆ.8 ರಿಂದ ಆರಭಗೊಂಡ ತಿರಂಗಾ ಜಾಥಗಳು ಪ್ರತಿದಿನ ಹತ್ತಾರು ಸಂಘ, ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರಾಜಕೀಯ ಪಕ್ಷಗಳ ನೇತೃತ್ವದಲ್ಲಿ, ಕಾಲ್ನಡಿಗೆ ಜಾಥಾ, ಬೈಕ್ ಜಾಥಾಗಳು ಭರದಿಂದ, ಸಡಗರ-ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.…
Read More »ಇಂದಿನಿದ ಹಳ್ಳಿಖೇಡ(ಕೆ) ಶರಣ ಕಿನ್ನರಿ ಬೊಮ್ಮಯನವರ 53ನೇ ಜಾತ್ರಾ ಮಹೋತ್ಸವ
ಇಂದಿನಿದ ಹಳ್ಳಿಖೇಡ(ಕೆ) ಶರಣ ಕಿನ್ನರಿ ಬೊಮ್ಮಯನವರ 53ನೇ ಜಾತ್ರಾ ಮಹೋತ್ಸವ ಹುಮನಾಬಾದ:ಆ.14/ ತಾಲೂಕಿನ ಹಳ್ಳಿಖೇಡ(ಕೆ) ಗ್ರಾಮದ ಶರಣ ಕಿನ್ನರಿ ಬೊಮ್ಮಯ್ಯನವರ 53ನೇ ಜಾತ್ರಾ ಮಹೋತ್ಸವ ಆ.14 ರಿಂದ ಆ.19ರ ವರೆಗೆ ನಡೆಯಲ್ಲಿದೆ ಎಂದು ದೇವಸ್ಥಾನ ಪಂಚ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ.14ರಂದು ಪಾದಪೂಜೆ ಹಾಗೂ ಉದ್ಘಾಟನಾ ಸಮಾರಂಭ ನಡೆಯಲ್ಲಿದ್ದು, ಬೇಳಗಿ ಶಿವಲಿಂಗೇಶ್ವರ ಸಂಸ್ಥಾನದ ಶಿವಲಿಂಗ ಮಹಾಸ್ವಾಮಿಗಳು, ಚರಮೂರ್ತಿ ಸಿದ್ಧರಾಮ ಸ್ವಾಮಿಗಳು, ಶಾಸಕ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ, ಸಾಹಿತಿ ಕಲ್ಯಾಣರಾವ ಪಾಟೀಲ, ಡಾ| ಶರಣಬಸಪ್ಪ ವಡ್ಡನಕೇರಿ…
Read More »ಜೆಡಿಎಸ್ ಪಕ್ಷಕ್ಕೆ ನಸಿಮೊದ್ದೀನ್ ಪಾಟೀಲ್ ರಾಜೀನಾಮೆ.
ಜೆಡಿಎಸ್ ಪಕ್ಷಕ್ಕೆ ನಸಿಮೊದ್ದೀನ್ ಪಾಟೀಲ್ ರಾಜೀನಾಮೆ. ಬೀದರ: ಜೆಡಿಎಸ್ ಪಕ್ಷಕ್ಕೆ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ನಸೀಮೊದ್ದೀನ್ ಪಟೇಲ್ ರಾಜೀನಾಮೆ ನೀಡಿದ್ದಾರೆ. ನಸಿಮೊದ್ದೀನ್ ಪಟೇಲ್ ಮಾಜಿ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ದಿ। ಮೇರಾಜೋದ್ದಿನ್ ಪಟೇಲ್ ಅವರ ಸಹೋದರೂ ಕೂಡ ಹೌದು. ಮೀರಾಜೋದಿನ ಪಟೇಲರ ನಿಧನದ ನಂತರ ನಡೆದ 2013, 2018 ವಿಧಾನ ಸಭೆ ಚುನಾವಣೆಯಲ್ಲಿ ಹುಮನಾಬಾದ ಮತ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಸಿಮೊದ್ದೀನ್ ಪಟೇಲ ಸ್ಪರ್ಧೆ ನಡೆಸಿ…
Read More »ಹುಮನಾಬಾದ ಎಪಿಎಂಸಿಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ..!
ಹುಮನಾಬಾದ ಎಪಿಎಂಸಿಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ..! ಹುಮನಾಬಾದ: ಪಟ್ಟಣದ ಎಪಿಎಂಸಿಯಲ್ಲಿ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ. ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಅನೇಕ ಅವ್ಯವಸ್ಥೆಗಳು ಇಲ್ಲಿ ಎದ್ದು ಕಾಣುತ್ತಿವೆ. 2022ರ ಫೆಬ್ರುವರಿ ತಿಂಗಳಲ್ಲಿ ಚುನಾಯಿತ ಆಡಳಿತ ಮಂಡಳಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸದ್ಯ ಸಮಿತಿಗೆ ಯಾವುದೇ ಆಡಳಿತ ಮಂಡಳಿ ಇಲ್ಲ. ಆದರೆ ಸಧ್ಯಕ್ಕೆ ಎಪಿಎಂಸಿ ಬೀದರ ಅಧಿಕಾರಿಯೆ ಆಡಳಿತ ಅಧಿಕಾರಿಯಾಗಿ ನೇಮಕಗೊಂಡಿದ್ದು, ಇಲ್ಲಿನ ಕಚೇರಿಗೆ ಖಾಯಂ ಕಾರ್ಯದರ್ಶಿ ಕೂಡ ಇಲ್ಲ. ಪ್ರಭಾರಿ ಕಾರ್ಯದರ್ಶಿಯೊಬ್ಬರು…
Read More »ಸಕಾಲ ಯೋಜನೆ ಅನುಷ್ಠಾನದಲ್ಲಿ ಗ್ರೇಡ್-2 ತಹಶೀಲ್ದಾರ ಮುಂದೆ.
ಸರ್ಕಾರದ ಯೋಜನೆಗಳು ಜನರು ಸೂಕ್ತವಾಗಿ ಬಳಸಿಕೊಳ್ಳಬೇಕು – ಜಯಶ್ರೀ ಜಿ.ಟಿ ಹುಮನಾಬಾದ: ಸಕಾಲ ಯೋಜನೆ ಅನುಷ್ಠಾನ ಸೇರಿದಂತೆ ತಮ್ಮ ವ್ಯಾಪ್ತಿಗೆ ಬರುವ ವಿವಿಧ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುತ್ತಿರುವ ಹುಮಾನಾಬಾದ ಗ್ರೇಡ್-2 ತಹಶೀಲ್ದಾರ ಜಯಶ್ರೀ ಜಿ.ಟಿ ಅವರ ಸೇವೆಗೆ ಇಲ್ಲಿನ ಜನರು ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ. ವಿವಿಧ ಪ್ರಮಾಣ ಪತ್ರಗಳಿಗಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ತ್ವರಿತಗತಿಯಲ್ಲಿ, ಸರ್ಕಾರದ ಕಾಲ ಕಾಲಮಿತಿಯೊಳಗೆ ವಿಲೇವಾರಿ ಮಾಡುವ ಕೆಲಸ ಮಾಡುತ್ತಿದ್ದು, ಜನರು ಕಚೇರಿಗೆ ಅಲೆಯುವುದನ್ನು ತಪ್ಪಿಸುತ್ತಿದ್ದಾರೆ. ಸಂಕಷ್ಟಗಳು…
Read More »ಅಪರಿಚಿತ ವ್ಯಕ್ತಿಯ ಶವ ಪತ್ತೆ – ಕೊಲೆ ಶಂಕೆ
ಅಪರಿಚಿತ ವ್ಯಕ್ತಿಯ ಶವ ಪತ್ತೆ – ಕೊಲೆ ಶಂಕೆ ಬೀದರ: ಹುಮನಾಬಾದ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಬೆಳಗಿನ ಜಾವ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿ ಮಾಡಿದೆ. ಸುಮಾರು 30 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ವ್ಯಕ್ತಿಯ ಬಳಿ ಯಾವುದೇ ಗುರುತಿನ ದಾಖಲೆಗಳು ಪತ್ತೆಯಾಗಿಲ್ಲ.ಮೃತ ವ್ಯಕ್ತಿಯ ಹೊಟ್ಟೆಯ ಕೆಳಭಾಗದಲ್ಲಿ ಹರಿತ ವಸ್ತುವಿನಿಂದ ಚುಚ್ಚಿರುವ ಗಾಯಗಳು ಕಂಡು ಬಂದಿವೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ವ್ಯಕ್ತಿಯ…
Read More »ಹುಮನಾಬಾದ: 12 ಮರಳು ತುಂಬಿದ ಟಿಪ್ಪರ್ ಪೊಲೀಸ್ ವಶಕ್ಕೆ
ಹುಮನಾಬಾದ: ಪಟ್ಟಣ ಹೊರ ಪ್ರದೇಶದಲ್ಲಿ ಪರವಾನಗಿ ರಹಿತ ಹಾಗೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮರಳು ತುಂಬಿದ ಒಟ್ಟಾರೆ 12ಕ್ಕೂ ಅಧಿಕ ಟಿಪ್ಪರ ವಾಹನಗಳನ್ನು ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೀದರ್ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು ಅವರ ಮಾರ್ಗದರ್ಶನದಲ್ಲಿ ಭಾಲ್ಕಿ ವಲಯದ ಎಎಸ್ಪಿ ಪೃಥ್ವಿಕ್ ಶಂಕರ್ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ, ಭಾರಿ ಪ್ರಮಾಣದ ಮರಳು ವಾಹನಗಳು ಹುಮನಾಬಾದ ಪೊಲೀಸ್ ಠಾಣಾ ಮೈದಾನದಲ್ಲಿ ನಿಲ್ಲಿಸಲಾಗಿದೆ. ಗುರುವಾರ ರಾತ್ರಿ-ಶುಕ್ರವಾರ ಬೆಳಗ್ಗಿನ ಜಾವದಲ್ಲಿ ವಾಹನ…
Read More »


















