ಬೀದರ
ಸಿಡಿಲಿಗೆ ವ್ಯಕ್ತಿ ಬಲಿ
ಹುಮನಾಬಾದ:17OCT19: ಗುರುವಾರ ಸುರಿದ ಗುಡುಗು ಮಿಂಚು ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನಲ್ಲಿ ನಡೆದಿದೆ. ಉಮೇಶ್ ರೆಡ್ಡಿ ಹನುಮಂತ್ ರೆಡ್ಡಿ ಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಳೆ ಬರುವ ಸಂದರ್ಭದಲ್ಲಿ ಈ ವ್ಯಕ್ತಿ ಹೊಲದಲ್ಲಿದ್ದ ಕಾರಣ ಸಿಡಿಲಿಗೆ ಬಲಿಯಾಗಿದ್ದಾನೆ. ತಾಲ್ಲೂಕಿನ ಬನ್ನಳ್ಳಿ ಹೊರವಲಯದಲ್ಲಿ ಈ ಘಟನೆ ಸಂಭವಿಸಿದೆ. ಈ ಕುರಿತು ಚಿಟಗುಪ್ಪ ಪೊಲೀಸ್ ಠಾಣೆಯ ಪೊಲೀಸರು ಭೇಟಿನೀಡಿ ಪರಿಶಿಲನೆ ನಡೆಸಿದ್ದಾರೆ.
Read More »ಪಿಜಿ ಮುಗಿಸಿದ ರೈತನ ಮಗ ಆತ್ಮಹತ್ಯೆ
ಹುಮನಾಬಾದ:17OCT19: ತಾಲೂಕಿನ ಜಲಸಂಗಿ ಗ್ರಾಮದ ಸಿದ್ದಪ್ಪ ಹೊನಗೊಂಡ ಅವರ ಮಗ ಗಜಾನಂದ (25 ವರ್ಷ) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪಿಜಿ ವಿದ್ಯಾಭ್ಯಾಸ ಮುಗಿಸಿ ಗಜಾನಂದ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಹಾಗೂ ಹೊಲದಲ್ಲಿ ರೈತನಾಗಿ ದುಡಿಯುತ್ತಿದ್ದ ಈತ ಹೆಚ್ಚಿನ ಶಿಕ್ಷಣಕಾಗಿ ಧಾರವಾಡ ಸೆಂಟರ್ಗೆ ಸೇರಬೇಕು ಎಂಬ ಹಂಬಲ ಹೊಂದಿದ. ಆದರೆ,ತಂದೆ ಬ್ಯಾಂಕ್ ಹಾಗೂ ಖಾಸಗಿ ಒಟ್ಟಾರೆ 7 ಲಕ್ಷ ಸಾಲ ಹೊಂದಿದ್ದು, ಶಿಕ್ಷಣಕ್ಕೆ ಹಣ ಇಲ್ಲದ ಕಾರಣ…
Read More »ರೇಕುಳಗಿಗೆ ಬಿ.ವೈ ವಿಜೆಯೇಂದ್ರ ಭೇಟಿ
ಬೀದರ: ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜೇಯಂದ್ರ ತಾಲೂಕಿನ ರೇಕುಳಗಿ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಭಾನುವಾರ ಭೇಟಿನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕಲಬುರಗಿ ಜಿಲ್ಲೆಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮೀಸಿದ ಅವರು, ಕುಟುಂಬ ಸಮೇತ ರೇಕುಳಗಿ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿನೀಡಿ ದರ್ಶನ ಪಡೆದಿದ್ದಾರೆ. ರಾಕೀಯ ವ್ಯಕ್ತಿಗಳಿಗೆ ಉನ್ನತ ಸ್ಥಾನ ನೀಡುವ ಕೇಂದ್ರವೆಂದು ಗುರುತಿಸಿಕೊಂಡಿರುವ ಇಲ್ಲಿನ ದೇವಸ್ಥಾನಕ್ಕೆ ರಾಷ್ಟ್ರ ಹಾಗೂ ರಾಜ್ಯದ ಅನೇಕ ರಾಜಕೀಯ ಮುಖಂಡರು ಭೇಟಿನೀಡಿ ವಿಶೇಷ ಪೂಜೆಸಲ್ಲಿಸಿದ್ದಾರೆ.
Read More »ಬೀದರ ಜಿಲ್ಲೆ ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಬೇಕು.
ಬೆಂಗಳೂರು- ಬೀದರ ಜಿಲ್ಲೆಯಲ್ಲಿ ವಾಡಿಕೆಗಿಂದ ಕಡಿಮೆ ಮಳೆಯಾಗಿದ್ದು, ರಾಜ್ಯ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಟ್ವೀಟ್ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ. ಅಲ್ಲದೇ, ಮೈತ್ರಿ ಸರ್ಕಾರದ ಅವಧಿಯಲ್ಲಿ ಮಾಡಿದ ಸಾಲಮನ್ನಾ ಯೋಜನೆಯಲ್ಲಿ 1.17 ಲಕ್ಷ ರೈತರ ಖಾತೆಗೆ ಮಾತ್ರ ಹಣ ಜಮೆಗೊಂಡಿದ್ದು, ಇನ್ನೂ ಉಳಿದ ರೈತರಿಗೆ ತಕ್ಷಣ ಸಾಲ ಮನ್ನಾದ ಹಣ ಜಮಾವಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.…
Read More »ಅ.19ರ ವರೆಗೆ ಉದ್ದು, ಹೆಸರು ಖರೀದಿಗಾಗಿ ನೊಂದಣೆ- ಖೂಬಾ
ಬೀದರ: ಉದ್ದು, ಹೆಸರು ಬೆಳೆದ ರೈತರು ಮುಂದಿನ ಅ.19ರ ವರೆಗೆ ಖರೀದಿಗಾಗಿ ನೊಂಡಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಲೋಕಸಭೆ ಸದಸ್ಯ ಭಗವಂತ ಖೂಬಾ ತಿಳಿಸಿದ್ದಾರೆ. ಈ ಕಉರಿತು ಪ್ರಕಟಣೆ ಹೊರಡಿಸಿದರುವ ಅವರು, ಜಿಲ್ಲೆಯ ರೈತರು ಉದ್ದು, ಹೆಸರು ನೊಂದಣೆ ದಿನಾಂಕ ವಿಸ್ತರಿಸುವಂತೆ ಮನವಿ ಸಲ್ಲಿಸಿದರು. ಈ ಕುರಿತು ಸಹಕಾರ ಸಚಿವ ಲಕ್ಷ್ಮಿಣ ಸವದಿ ಅವರ ಗಮನಕ್ಕೆ ತಂದು ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ದಿನಾಂಕ ವಿಸ್ತರಣೆ ಮಾಡುವಂತೆ ಮನವಿ…
Read More »













